Monday 26 May 2014

                                                       "ನಗರ ಜೀವನದ ಆಕರ್ಷಣೆ"    
     ತಮ್ಮ ಮಕ್ಕಳನ್ನು ಕಷ್ಟಪಟ್ಟು ಓದಿಸುವ ತಂದೆ-ತಾಯಿ ತಮ್ಮ ಮಕ್ಕಳಿಂದ ಬಯಸುವುದು ಕೊನೆಗಾಲದ ಆಸರೆಯಷ್ಟೇ. ಮಕ್ಕಳು ವಿಧ್ಯಾಬ್ಯಾಸದ ನೆಪದಲ್ಲಿ ಪಟ್ಟಣ ಸೇರುತ್ತಾರೆ. ಅಲ್ಲಿನ ಜೀವನಕ್ಕೆ ಬೇಗ ಒಗ್ಗುವ ಮಕ್ಕಳು ಕೊನೆಗೊಂದು ದಿನ ಅಲ್ಲಿಯೇ ಕೆಲಸ ಗಿಟ್ಟಿಸಿಕೊಂಡು ಅಲ್ಲೇ ಸೆಟ್ಲಾಗುತ್ತಾರೆ. ವಯಸ್ಸಾದ ತಂದೆ-ತಾಯಿ ಹಳ್ಳಿಯಲ್ಲಿಯೇ ಉಳಿಯಬೇಕಾಗುತ್ತದೆ.
ತಮ್ಮ ಹೆಂಡತಿ-ಮಕ್ಕಳೊಂದಿಗೆ ಬ್ಯುಸಿಯಾಗುವ ಮಕ್ಕಳು ತಮ್ಮ ತಂದೆ-ತಾಯಿ ಯನ್ನು ನೋಡಲೂ ಮರೆಯುತ್ತಾರೆ. ತಮ್ಮ ಮಕ್ಕಳು ಏಲ್ಲೋ ಖುಷಿಯಾಗಿರುವುದನ್ನು ಕಂಡು ಕೊನೆಯ ಕ್ಷಣಗಳನ್ನು ಕಳೆಯುತ್ತಾರೆ. ಎಲ್ಲರ ಮನೆಯ ದೋಸೆ ತೂತು ಎಂಬಂತೆ  ಎಲ್ಲರ ಮನೆಯಲ್ಲಿ ನಡೆಯುವುದು ಇಷ್ಟೇ. ಒಮ್ಮೆ ಜನಗಣತಿ ದಾಖಲೆಯನ್ನು ಗಮನಿಸಿದರೆ ನಮಗೆ ತಿಳಿಯುವ ಸತ್ಯ ಹಳ್ಳಿಗಳಲ್ಲೇ ಅತಿ ಹೆಚ್ಚು ವೃಧ್ದರಿರುವುದೆಂದು. ಹೀಗಾಗಿ ಹಳ್ಳಿಗಳು ವೃಧ್ಧಾಶ್ರಮಗಳಂತೆ ಕಾಣುತ್ತಿವೆ. ಇನ್ನು ಮುಂದಾದರು ತಂದೆ-ತಾಯಿ ಯನ್ನು ಒಂಟಿಯಾಗಿ ಬಿಡದೆ ಅವರ ಕೊನೆಗಾಲಕ್ಕೆ ಆಸರೆಯಾಗಲಿ ಎಂದು ಬಯಸುತ್ತೇನೆ.
                                                                                -ನವೀನ್.ಎನ್ ಗೌರಿಬಿದನೂರು.


Published in Kannadaprabha dated: 06/01/2014

No comments:

Post a Comment